ಹೇಗೆ ಹೇಳಲೇ ಗೆಳತಿ

ಹೇಗೆ ಹೇಳಲೇ ಗೆಳತಿ
ದಿನವಿಡಿ ಹರಿಯದೇ ಧ್ಯಾನ,
ಈ ಕಳ್ಳನ ಮಾಯೆಗೆ ಸಿಕ್ಕಿ
ಕಳೆದುಕೊಂಡೆನೇ ಮಾನ

ಇವನಿಗೆ ಕಾದೂ ಕಾದೂ
ಮೈಯೆಲ್ಲಾ ಬಿಸಿ ಬಾಣಲೆ
ಬತ್ತ ಸಿಡಿಸಿದರು ಸಾಕು
ಅರಳಾಗುವುದೇ ಕೂಡಲೆ

ಹೇಳದೆ ಬಂದೇ ಬಿಡುವ
ಕರೆದರೂ ಬಾರದ ಹುಡುಗ,
ಮರುಳು ಮಾಡಿಯೇ ಬಿಡುವ
ಹಾಲು ಬೆಣ್ಣೆಗಳ ತುಡುಗ.

ಏನು ಧೀರನೇ ಪೋರ
ದಿನ್ನೆಯ ಸಲೀಸು ಏರುವ
ಎಲ್ಲರ ಕಣ್ಣೂ ತಪ್ಪಿಸಿ
ಕಣಿವೆಯ ತಳಕೂ ಇಳಿವ

ಈ ದಿನ ಸಿಕ್ಕೇ ಸಿಗುವ
ಎನ್ನಿಸುವುದು ಭ್ರಮೆಯಲ್ಲಿ
ಸಿಗುವುದೇನೊ ಹರಿ ನಿಜವೇ
ತಪ್ಪದೆ ರಾತ್ರಿ ಕನಸಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬
Next post ಲಿಂಗಮ್ಮನ ವಚನಗಳು – ೧೦೦

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys